Siddharamiah Mathapati to Preside Over Karnataka Music Festival
ಬಾಗಲಕೋಟೆ: ಬೀದರ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಹಾರಕೂಡ ಸಂಸ್ಥಾ ಹಿರೇಮಠದಲ್ಲಿ ಪಂಚಾಕ್ಷರ ಗವಾಯಿ ಸೇವಾ ಸಂಘ ಜ.27ರಂದು ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಸಂಗೀತ, ಸಾಹಿತ್ಯ ಮತ್ತು ನೃತ್ಯ ಸಮ್ಮೇಳನಕ್ಕೆ ಬಾಗಲಕೋಟೆ ಕಲಾಮಹಾವಿದ್ಯಾಲಯದ ನಿವೃತ್ತ ಪ್ರಚಾರ, ಹಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಡಾ.ಸಿದ್ದರಾಮಯ್ಯ ಮಠಪತಿ ಗೊರಟಾ ಅವರು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯದ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಅವರು ಸಂಗೀತದ ಕುರಿತಾಗಿ 13 ಕೃತಿಗಳನ್ನು ಹಾಗೂ 250 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದರ ಮೂಲಕ ಪಂಚಾಕ್ಷರ ಗವಾಯಿ ಸೇವಾ ಸಂಘ ಗೌರವಿಸಿದೆ.
![](https://nammabagalkot.com/wp-content/uploads/2023/01/WhatsApp-Image-2023-01-21-at-2.27.22-PM1-700x560.jpeg)