Health Department Gets Four Ambulances from Renuka Sugars Under CSIR Fund
ಬಾಗಲಕೋಟೆ : ರೇಣುಕಾ ಶುಗರ್ಸ್ ಕಾರ್ಖಾನೆಯ ಸಿಎಸ್ ಐರ್ ನಿಧಿಯ ಅಡಿಯಲ್ಲಿ ಬೀಳಗಿ ಮತ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಗೆ ನಾಲ್ಕು ಆ್ಯಂಬುಲೆನ್ಸ್ ಗಳನ್ನು ಹಸ್ತಾಂತರಿಸಲಾಯಿತು. ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಹಾಗೂ, ಬೀಳಗಿ ಮತ ಕ್ಷೇತ್ರದ ಶಾಸಕರಾದ ಮುರುಗೇಶ್ ನಿರಾಣಿ ಆ್ಯಂಬುಲೆನ್ಸ್ ಗಳನ್ನು ಹಸ್ತಾಂತರಿಸಿದರು.
ನವನಗರದಲ್ಲಿರುವ ಎಂಆರ್ಎನ್ಎ ಫೌಂಡೇಶನ್ ದ ತೇಜಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಸಚಿವರೊಂದಿಗೆ ರೇಣುಕಾ ಶುಗರ್ಸ್ ದ ಸಿನಿಯರ್ ವೈಸ್ ಪ್ರೆಸಿಡೆಂಟ್ ವಿಪಿನ್ ಕುಮಾರ್ ರಾಟಿ, ಡಾ: ಗೋವಿಂದ ಮಿಸಾಳೆ, ವೈಸ್ ಪ್ರೆಸಿಡೆಂಟ್, ಎಂ.ಆರ್ ನೀರಲಕರ್, ಎಜುಕೇಟಿವ್ ಡೈರೆಕ್ಟರ್, ಜಿಲ್ಲಾ ವೈದ್ಯಾಧಿಕಾರಿ ಜಯಶ್ರೀ ಎಮ್ಮಿ, ಬೀಳಗಿ ತಾಲೂಕಾ ವೈದ್ಯಾಧಿಕಾರಿ ಡಾ : ಕರಿಯನ್ನವರ ಉಪಸ್ಥಿತರಿದ್ದರು.