ಬಾಗಲಕೊಟೆ: ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ದಿ. 20 ರಿಂದ 22 ರವರೆಗೆ ನಿತ್ಯ ಸಾಯಂಕಾಲ 7 ಗಂಟೆಗೆ ಮೂರು ನಾಟಕಗಳು ಪ್ರದರ್ಶನವಾಗಲಿವೆ.
ಶಿವಕುಮಾರ ನಾಟ್ಯ ಸಂಘ ಸಾಣೆಹಳ್ಳಿಯ ಶಿವಸಂಚರ ಇವರಿಂದ ದಿ. 20 ರಂದು ಶುಕ್ರವಾರ, ಬಿಜ್ಜಳನ ನ್ಯಾಯ, ದಿ. 22 ರಂದು ಶನಿವಾರ ನೆಮ್ಮದಿ ಅಪಾರ್ಟಮೆಂಟ್ ಮತ್ತು ದಿ. 22 ರಂದು ರವಿವಾರ ಚಂದ್ರಹಾಸ ಎಂಬ ಮೂರು ನಾಟಕಗಳು ಪ್ರದರ್ಶನಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಿವಾನುಭವ ಸಮಿತಿ ಕೋರಿದೆ.