ಬಾಗಲಕೋಟೆ:
ಮನೆ ಕುಸಿತದಲ್ಲಿ ಮೃತಪಟ್ಟ ಕಿಲ್ಲಾ ಓಣಿಯ ಸುಧಾಬಾಯಿ ದೇಸಾಯಿ ಅವರ ಕುಟುಂಬಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಸಾಂತ್ವನ ಹೇಳಿದರು.
ಬೆಂಗಳೂರಿನಿಂದ ಬಾಗಲಕೋಟೆಗೆ ಆಗಮಿಸಿದ ಅವರು ನೇರವಾಗಿ ಸುಧಾಬಾಯಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸುಧಾಬಾಯಿ ಅವರ ಮಕ್ಕಳಾದ ಆಶಾ, ಛಾಯಾ, ಅಪ್ಪಣ್ಣ ಅವರೊಂದಿಗೆ ಮಾತನಾಡಿದ ಶಾಸಕರು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣದಲ್ಲಿ ಪರಿಹಾರ ಒದಗಿಸಲು ಸೂಚಿಸಿದ್ದೆ. ಘಟನೆ ನಡೆದಿರುವುದು ದುರದೃಷ್ಟಕರ ಎಂದರು.
ಸುಧಾಬಾಯಿ ಅವರ ಮನೆಗೆ ಮೇಲ್ಛಾಣಿಗೆ ತಗಡಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸೂಚಿಸಿದರು.